ಕೊಂಕಣಿ ಖಾರ್ವಿ ಪ್ರಗತಿಪರ ಸಂಘ ದಿಂದ ಶಿಲಾನ್ಯಾಸ ಕಾರ್ಯಕ್ರಮ

ಕೊಂಕಣಿ ಖಾರ್ವಿ ಪ್ರಗತಿಪರ ಸಂಘ (ರಿ) ಮದ್ದುಗುಡ್ಡೆ ಕುಂದಾಪುರ:

ನೂತನ ಸಭಾಭವನ ಹಾಗೂ ಶ್ರೀ ಮಹಾವಿಷ್ಣು ಮತ್ತು ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ

ದಿನಾಂಕ 24.02.2023 ರ ಶುಕ್ರವಾರದಂದು ಬೆಳಿಗ್ಗೆ 11:30ಕ್ಕೆ ಸರಿಯಾಗಿ ಅಭಿಜಿತ್ ಲಗ್ನ ಮುಹೂರ್ತದಲ್ಲಿ ಶ್ರೀ ಗೋಪಾಲ ಮಾಧವ ನಾವುಡರ ಪುರೋಹಿತ್ಯದಲ್ಲಿ ಸಭಾಭವನದ ಶಿಲಾನ್ಯಾಸವನ್ನು ಕುಂದಾಪುರದ ಉದಯ ಜ್ಯುವೆಲ್ಲರ್ಸ್ ಮಾಲಕರಾದ ಶ್ರೀ ಉದಯ್ ಕುಮಾರ ರವರು ಹಾಗೂ ಶ್ರೀ ಮಹಾವಿಷ್ಣು ಮತ್ತು ಶ್ರೀ ಅಯ್ಯಪ್ಪ ಸ್ವಾಮಿಯ ಭಜನಾ ಮಂದಿರದ ಶಿಲಾನ್ಯಾಸವನ್ನು ಕುಂದಾಪುರದ ಶ್ರೀ ಕುಂದೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ಕೃಷ್ಣಾನಂದ ಚಾತ್ರ ರವರು ನೆರವೇರಿಸಿ ಕೊಟ್ಟರು.

ಕೊಂಕಣಿ ಖಾರ್ವಿ ಪ್ರಗತಿಪರ ಸಂಘದ ಅಧ್ಯಕ್ಷರಾದ ಶ್ರೀ ನಾರಾಯಣ ಖಾರ್ವಿಯವರು ಕಾರ್ಯಕ್ರಮದ ಅಭ್ಯಾಗತರನ್ನುಸ್ವಾಗತಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ನೂತನ ಕಟ್ಟಡ ಸಮಿತಿಯ ಅಧ್ಯಕ್ಷರಾದ ಶ್ರೀ ಸಂಜೀವ ಖಾರ್ವಿ (ಎಂ ಎಸ್ ಕೆ) ವಹಿಸಿದ್ದರು. ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಗಣಪತಿ ಖಾರ್ವಿ ಯವರು ಪ್ರಾಸ್ತಾವಿಕ ಮಾತನಾಡಿ ಸಂಸ್ಥೆ ಅಂದಿನಿಂದ ಇಂದಿನವರೆಗೆ ಸಾಗಿ ಬಂದ ಹಾದಿಯನ್ನು ಬಹಳ ವಿಸ್ತಾರವಾಗಿ ತಿಳಿಸಿದರು.

ಸಮಾರಂಭದ ವೇದಿಕೆಯಲ್ಲಿ ಕಟ್ಟಡ ಸಮಿತಿಯ ಅಧ್ಯಕ್ಷರಾದ ಶ್ರೀ ಸಂಜೀವ ಖಾರ್ವಿ, ಮುಖ್ಯ ಅತಿಥಿಗಳಾಗಿರುವ ಉದಯ ಜುವೆಲರ್ಸ್ ಮಾಲಕರಾದ ಶ್ರೀ ಉದಯಕುಮಾರ್, ಕುಂದಾಪುರದ ಶ್ರೀ ಕುಂದೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ಕೃಷ್ಣಾನಂದ ಚಾತ್ರ, ಶ್ರೀ ಮಹಾಕಾಳಿ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಜಯಾನಂದ ಖಾರ್ವಿ, ಕುಂದಾಪುರದ ಖ್ಯಾತ ಉದ್ಯಮಿ ಶ್ರೀ ಪ್ರಶಾಂತ್ ತೋಳಾರ್, ಶ್ರೀ ನಾಗರಾಜ್ ಕಾಮಧೇನು, ಕೊಂಕಣಿ ಖಾರ್ವಿ ಪ್ರಗತಿಪರ ಸಂಘದ ಅಧ್ಯಕ್ಷರಾದ ಶ್ರೀ ನಾರಾಯಣ ಖಾರ್ವಿಯವರು ಶುಭ ಹಾರೈಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕೊಂಕಣಿ ಖಾರ್ವಿ ಪ್ರಗತಿಪರ ಸ್ವಸಹಾಯ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು, ಕೊಂಕಣಿ ಖಾರ್ವಿ ಮಹಿಳಾ ಪ್ರಗತಿಪರ ಸಂಘದ ಅಧ್ಯಕ್ಷರಾದ ಶ್ರೀ ತಾರಾ ಖಾರ್ವಿ ಹಾಗೂ ಸದಸ್ಯರು, ಪುರಸಭೆ ಸದಸ್ಯರಾದ ಶ್ರೀ ರಾಘವೇಂದ್ರ ಖಾರ್ವಿ, ಶ್ರೀ ಪ್ರಕಾಶ್ ಖಾರ್ವಿ , ಕೊಂಕಣಿ ಖಾರ್ವಿ ಸಮಾಜ ಬಹದ್ದೂರ್ ಷಾ ರಸ್ತೆ ಇದರ ಅಧ್ಯಕ್ಷರಾದ ಮಂಜುನಾಥ ಖಾರ್ವಿ, ಸ್ಥಳೀಯ ಸಂಘ ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು, ನಿರ್ದೇಶಕರು, ಊರ, ಪರವೂರ ಗ್ರಾಮಸ್ಥರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶ್ರೀ ಅಶೋಕ್ ಖಾರ್ವಿ ಹಾಗೂ ಭವಾನಿ ಶಂಕರ ಖಾರ್ವಿ ಯವರು ನಿರ್ವಹಿಸಿದರು ಸಂಸ್ಥೆಯ ಕಾರ್ಯದರ್ಶಿಯವರಾದ ಶ್ರೀ ಗಿರಿಧರ ಖಾರ್ವಿಯವರು ಧನ್ಯವಾದ ಸಮರ್ಪಣೆಗೈದರು.

ವರದಿ. ಅನಿಲ್ ಖಾರ್ವಿ
kharvionline ಪ್ರತಿನಿಧಿ ಮದ್ದುಗುಡ್ಡೆ

Leave a Reply

Your email address will not be published. Required fields are marked *