ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳೇ, ನಿಮಗೆ ಶುಭವಾಗಲಿ…

ರಾಜ್ಯದ ಎಲ್ಲಾ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಶುಭವಾಗಲಿ: ಶ್ರೀ ಮಹಾಕಾಳಿ ಅಮ್ಮನವರಲ್ಲಿ ಪ್ರಾರ್ಥನೆ ಸಲ್ಲಿಸಿದ ಆಡಳಿತ ಮಂಡಳಿ

ಕೊವೀಡ್ ನಡುವೆಯು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿರುವ ರಾಜ್ಯದ ಒಟ್ಟು ಸುಮಾರು 8.76 ಲಕ್ಷ ವಿದ್ಯಾರ್ಥಿಗಳಿಗೂ ಶುಭವಾಗಬೇಕು ಸರಸ್ವತಿ ರೂಪಿಣಿಯುಯಾದ ನಿನ್ನ ಸಂಪೂರ್ಣ ಅನುಗ್ರಹವಿರಲಮ್ಮ ಎಂದು ಶ್ರೀ ಮಹಾಕಾಳಿ ಅಮ್ಮನವರಲ್ಲಿ ಆಡಳಿತ ಮಂಡಳಿಯವರು ಪ್ರಾರ್ಥನೆ ಸಲ್ಲಿಸಿದ್ದಾರೆ.

ಅತ್ಯಂತ ಉತ್ತಮ ಸುರಕ್ಷಿತ ಕ್ರಮಗಳೊಂದಿಗೆ ಒಟ್ಟು 4,884 ಕೇಂದ್ರಗಳಲ್ಲಿ ಒಂದು ಕೊಠಡಿಯಲ್ಲಿ 12 ಮಂದಿಗಷ್ಟೇ ಅಂದರೆ ಒಂದು ಡೆಸ್ಕ್ 1 ವಿದ್ಯಾರ್ಥಿಗಷ್ಟೆಯಂತೆ ಅತ್ಯಂತ ಸುರಕ್ಷ ಕ್ರಮಗಳಿಂದ ಪರೀಕ್ಷೆ ನಡೆಸುತ್ತಿರುವ ರಾಜ್ಯ ಸರ್ಕಾರದ ಉತ್ತಮ ನಿಲುವನ್ನು ಸ್ವಾಗತಿಸುತ್ತೇನೆ, ಭವಿಷ್ಯದ ಮುಖ್ಯ ಘಟ್ಟವಾಗಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಯು ಎಲ್ಲಾ ಮಕ್ಕಳಿಗೆ ಆಶಾದಾಯಕವಾ ಗಲಿ ಎಂದು ದೇವಸ್ಥಾನದ ಅಧ್ಯಕ್ಷರಾದ ಶ್ರೀ ಜಯನಂದ್ ಖಾರ್ವಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಶ್ರೀ ಜಯನಂದ್ ಖಾರ್ವಿ, ಮಾಜಿ ಅಧ್ಯಕ್ಷರು, ಹಾಗೂ ಪ್ರಸ್ತುತ ಸಲಹೆಗಾರರಾಗಿರುವ ಶ್ರೀ ಪ್ರಕಾಶ್ ಆರ್ ಖಾರ್ವಿ, ಪ್ರಧಾನ ಕಾರ್ಯದರ್ಶಿ ಕೇಶವ್ ಖಾರ್ವಿ, ನಿರ್ದೇಶಕರಾದ ಮನೋಜ್ ಖಾರ್ವಿ ಉಪಸ್ಥಿತರಿದ್ದರು.

ವರದಿ: ಸುನೀಲ್ ಖಾರ್ವಿ

Leave a Reply

Your email address will not be published. Required fields are marked *