ಮುಂಬೈ ಸಮಾಜ ಬಾಂಧವರಿಂದ ಆಷಾಢ ಏಕಾದಶಿ ಪೂಜೆ

ಮುಂಬೈ.ಜು.21; ಮುಂಬೈ ವಿರಾರ್ ವೆಸ್ಟ್ನ ವಿಷ್ಣು ಭಜನಾ ಮಂದಿರದಲ್ಲಿ ಕೊಂಕಣಿ ಖಾರ್ವಿ ಸಮಾಜ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಆಷಾಢ ಏಕಾದಶಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಆಷಾಢ ಏಕಾದಶಿಯ ಪೂಜಾ ಸೇವಾಕರ್ತರಾದ ಅಶೋಕ್ ಗಂಗೊಳ್ಳಿ ಮತ್ತು ಕುಟುಂಬಸ್ಥರ ಉಪಸ್ಥಿತಿಯೊಂದಿಗೆ ಸಕಲ ಭಕ್ತರಿಗೂ ಅವಕಾಶವನ್ನು ಕಲ್ಪಿಸಲಾಗಿತ್ತು. ಕೋವಿಡ್ ನಿಯಮಾವಳಿ ಪ್ರಕಾರ ಕಾರ್ಯಕ್ರಮವನ್ನು ನಿರ್ವಹಿಸಲಾಯಿತು, ಭಕ್ತರು ಮಂದಿರಕ್ಕೆ ಆಗಮಿಸಿ ದೇವರ ದರ್ಶನ ಭಾಗ್ಯ ಪಡೆದರು. ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಶ್ರೀ ದೇವರ ಸನ್ನಿಧಿಯಲ್ಲಿ ಸಮಾಜ ಭಾಂಧವರಿಂದ ಭಜನೆ ಹಾಡುಗಳು ಮತ್ತು ಕುಣಿತ ಭಜನಾ ಕಾರ್ಯಕ್ರಮವು ವಿಶೇಷತೆಯನ್ನು ಪಡೆದಿತ್ತು.

ಕೊಂಕಣಿ ಖಾರ್ವಿ ಸಮಾಜ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಉದಯ. ಎಸ್. ಖಾರ್ವಿ ಕಾರ್ಯದರ್ಶಿ ಶ್ರಿಧರ್ ಗಂಗೊಳ್ಳಿ, ರಮನಾಥ್ ಸಾರಂಗ್, ಚಂದ್ರಕಾಂತ್ ನಾಯಕ್, ಲೇಕ್ ರಾಜ್ ನಾಯಕ್, ನರೇಂದ್ರ ಪಂಡಿತ್ ಪದಾಧಿಕಾರಿಗಳು ಹಾಗೂ ಸಮಾಜ ಭಾಂದವರು, ಅನೇಕ ಭಕ್ತರು ಪಾಲ್ಗೊಂಡಿದ್ದರು.

ವರದಿ: ಉದಯ. ಎಸ್. ಖಾರ್ವಿ, ಮುಂಬೈ

Leave a Reply

Your email address will not be published. Required fields are marked *