ಅತಿರುದ್ರ ಮಹಾಯಾಗ ಆಮಂತ್ರಣ

ದಕ್ಷಿಣಾಮಯ್ನಾ ಶ್ರೀ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ಶ್ರೀ ಭಾರತಿತೀರ್ಥ ಮಹಾಸ್ವಾಮಿಯವರ ಪರಮಮಾನುಗ್ರಹದಿಂದ ಶ್ರೀ ‌ಮಜ್ಜಗದ್ಗುರುಗಳಾದ ಶ್ರೀ ವಿದುಶೇಖರ ಭಾರತಿ ಸ್ವಾಮಿಯವರ ದಿವ್ಯ ಉಪಸ್ಥಿತಿಯಲ್ಲಿ ತಾರೀಕು 22.2.2023 ರಿಂದ 5.3.2023 ರ ಪರ್ಯಂತ ಉಡುಪಿ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅತಿರುದ್ರ ಮಹಾಯಾಗ ನಡೆಯಲಿದೆ.ಈ ಪವಿತ್ರ ಧಾರ್ಮಿಕ ಕಾರ್ಯ ಲೋಕಕಲ್ಯಾಣಾರ್ಥ ಮತ್ತು ಸಮಸ್ತ ಆಸ್ತಿಕ ಭಕ್ತರ ಕ್ಷೇಮಾರ್ಥವಾಗಿ ಸಂಪನ್ನಗೊಳ್ಳಲಿದೆ.

ಜಗದ್ಗುರು ಶ್ರೀ ಭಾರತಿತೀರ್ಥ ಮಹಾಸ್ವಾಮಿಗಳ ಸೂಚನೆಯಂತೆ ಶ್ರೀ ಶೃಂಗೇರಿ ಮಠದ ಪರಂಪರಾನುಗತ ಶಿಷ್ಯ ವೃಂದವಾದ ಕೊಂಕಣಿ ಖಾರ್ವಿ ಸಮಾಜ ಬಾಂಧವರೆಲ್ಲರೂ ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಲು ಆಮಂತ್ರಣ ಬಂದಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಗುರುವಂದನಾ ಸಮಿತಿಯ ಅಧ್ಯಕ್ಷರಾದ ಶ್ರೀ ಮಾಧವ ಖಾರ್ವಿ ಮತ್ತು ಖಾರ್ವಿ ಆನ್ಲೈನ್ ಸಂಪಾದಕರಾದ ಶ್ರೀ ಸುಧಾಕರ್ ಖಾರ್ವಿಯವರು ಅತಿರುದ್ರ ಮಹಾಯಾಗದ ಆಮಂತ್ರಣವನ್ನು ಗಂಗೊಳ್ಳಿ ಶ್ರೀ ಮಹಾಂಕಾಳಿ ದೇವಸ್ಥಾನಕ್ಕೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಗಂಗೊಳ್ಳಿ ಶ್ರೀ ಮಹಾಂಕಾಳಿ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಮಡಿ ಶಂಕರ ಖಾರ್ವಿ, ದೇವಸ್ಥಾನದ ಆಡಳಿತ ಮಂಡಳಿಯ ಪಧಾದಿಕಾರಿಗಳು ಮತ್ತು ಶ್ರೀ ನಾಗಪ್ಪಯ್ಯ ಪಠೇಲರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕೊಂಕಣಿ ಖಾರ್ವಿ ಸಮಾಜ ಬಾಂಧವರೆಲ್ಲರೂ ಈ ಪವಿತ್ರ ಕಾರ್ಯದಲ್ಲಿ ಪಾಲ್ಗೊಂಡು ಶ್ರೀದೇವರ ಕೃಪೆಗೆ ಪಾತ್ರರಾಗಬೇಕೆಂದು ಈ ಮೂಲಕ ವಿನಂತಿಸಲಾಗಿದೆ.

www.kharvionline.com

Leave a Reply

Your email address will not be published. Required fields are marked *