ಕೊಂಕಣಿ ಖಾರ್ವಿ ವಿದ್ಯಾ ವೇದಿಕೆ ಬೆಂಗಳೂರು 6ನೇ ವರ್ಷದ ಸಂಭ್ರಮದ ಗಣೇಶೋತ್ಸವ

ಕೊಂಕಣಿ ಖಾರ್ವಿ ವಿದ್ಯಾ ವೇದಿಕೆ ಬೆಂಗಳೂರು ಇದರ 6 ನೇ ವರ್ಷದ ಗಣೇಶೋತ್ಸವವನ್ನು ಸಂಘದ ಕಚೇರಿಯಲ್ಲಿ ತಾರೀಕು 24.9.2023 ರಂದು ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ವಿಶೇಷವಾಗಿ ಮಹಿಳಾ ಸಂಘ ಬೆಂಗಳೂರು ಇವರ ಪಾತ್ರವು ಬಹುಮುಖ್ಯವಾಗಿದ್ದು,ಬಂದಂತಹ ಎಲ್ಲಾ ಮುತೈದೆಯರನ್ನು ಅರಶಿನ ಕುಂಕುಮ ನೀಡಿ ಗೌರವಿಸುವ ಮೂಲಕ ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಿದರು.ಸಂಜೆ 4.30 ಕ್ಕೆ ಬೆಂಗಳೂರು ಸದಾಶಿವ ನಗರದ ಸ್ಯಾಂಕಿ ಟ್ಯಾಂಕ್ ಕೆರೆಯಲ್ಲಿ ಗಣಪತಿ ವಿಸರ್ಜನೆ ಕಾರ್ಯ ನಡೆಯಿತು.

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ತಮ್ಮ ಅಮೂಲ್ಯ ಸಮಯವನ್ನು ವಿನಿಯೋಗಿಸಿ ಸಮಾರಂಭದ ಯಶಸ್ಸಿಗೆ ಶ್ರಮಿಸಿದ ಮಹಿಳಾ ಸಂಘದವರಿಗೆ, ಮಾತೆಯರಿಗೆ ಮತ್ತು ಸಮಾಜ ಭಾಂಧವರಿಗೆಲ್ಲರಿಗೂ ಕೊಂಕಣಿ ಖಾರ್ವಿ ವಿದ್ಯಾ ವೇದಿಕೆಯ ಅಧ್ಯಕ್ಷರಾದ ರವಿರಾಮ್ ಖಾರ್ವಿಯವರು ಹಾಗೂ ಸಂಘದ ಸರ್ವ ಸದಸ್ಯರು ಹೃತ್ಪೂರ್ವಕ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.

Leave a Reply

Your email address will not be published. Required fields are marked *