ಸ್ಮೃತಿ ಲಹರಿ ಪುಸ್ತಕ ಬಿಡುಗಡೆ ಕಾರ್ಯಕ್ರಮ

ಕೊಂಕಣಿ ಖಾರ್ವಿ ಸಮಾಜದ ಸಮಾಜಮುಖಿ ಚೈತನ್ಯ ಶ್ರೀ ಬಿ. ಮಾಧವ ಖಾರ್ವಿಯವರ ಸ್ಮೃತಿ ಲಹರಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಶುಭ ಶುಕ್ರವಾರ ಸಂಪನ್ನಗೊಳ್ಳಲಿದೆ ಸಮಾಜ ಸೇವೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟುಕೊಂಡು ಆದರ್ಶ ಪಥದಲ್ಲಿ ನಡೆಯುತ್ತಿರುವ ಮಾಧವ ಖಾರ್ವಿಯವರು ನಮಗೆಲ್ಲಾ ಶ್ರೇಷ್ಠ ಮಾರ್ಗದರ್ಶಕರು

ಬದುಕಿನ ಪಥದಲ್ಲಿ ಸಮಾಜದ ಬಗೆಗಿನ ಚಿಂತನೆ ,ಸಮಾಜದ ಸಂಸ್ಕೃತಿ , ಸಂಪ್ರದಾಯಗಳ ಬಗ್ಗೆ ಸವಿಸ್ತಾರವಾದ ಅಧ್ಯಯನಶೀಲತೆ, ಸಮಾಜದ ಅಭಿವೃದ್ಧಿಯ ಕನಸು, ರೂಪುರೇಷೆ ಸೇರಿದಂತೆ ಗೇರುಸೊಪ್ಪದ ಕಾಡಿನಲ್ಲಿ ಸನ್ಯಾಸಿಯಾಗಿ ಆಧ್ಯಾತ್ಮವನ್ನು ಪಸರಿಸುತ್ತಿರುವ ಕೊಂಕಣಿ ಖಾರ್ವಿ ಸಮಾಜದ ಸ್ವಾಮೀಜಿಯೊಬ್ಬರ ಚಿತ್ರಣ ಕೂಡಾ ಸ್ಮೃತಿ ಲಹರಿಯಲ್ಲಿ ಪಡಿಮೂಡಿದೆ ಸಮಾಜದ ಬಗೆಗಿನ ನಿರಂತರ ಕಾಳಜಿ, ಕಳಕಳಿಯಿಂದ ತಮ್ಮ ಬದುಕಿನ ಉದಾತ್ತ ಚಿಂತನೆಯೊಂದಿಗೆ ಸಮರ್ಪಿಸಿಕೊಂಡಿರುವ ಶ್ರೀ ಮಾಧವ ಖಾರ್ವಿಯವರಿಗೆ ಖಾರ್ವಿ ಆನ್ಲೈನ್ ಕೊಂಕಣಿ ಖಾರ್ವಿ ಸಮಾಜದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತದೆ.

www.kharvionline.com

Leave a Reply

Your email address will not be published. Required fields are marked *