Kharvionline ಮನವಿಗೆ ಶೀಘ್ರ ಸ್ಪಂದಿಸಿದ ಸುನೀಲ್ ಖಾರ್ವಿ.

ಕುಂದಾಪುರ ದ ರಾಜ ಕಾಲುವೆ ಸುಡುಗಾಡು ತೊಡಿನಲ್ಲಿ ಮನೆಯ ಗೊಡೆಯೊಂದು ಬಿದ್ದು ವರ್ಷಗಳೆ ಕಳೆದು ನೀರು ಹರಿಯಲು ಅಡ್ಡವಾಗಿತ್ತು, ಅವ್ಯವಸ್ಥೆ ಬಗ್ಗೆ kharvionline ಭಾವಚಿತ್ರ ಸಮೇತವಾಗಿ ಬಿತ್ತರಿಸಿತು, ಇದಕ್ಕೆ ಸಾರ್ವಜನಿಕ ವಲಯದಲ್ಲೂ ತೀವ್ರ ಅಸಮಾಧಾನ ದ ಕಂಮೆಂಟ್ ಬಿತ್ತರವಾಗುತ್ತಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಯುವ ಮೊರ್ಚಾ ಪ್ರಧಾನ ಕಾರ್ಯದರ್ಶಿ ಸುನೀಲ್ ಖಾರ್ವಿ ಯವರು kharvionline ನ್ನು ಸಂಪರ್ಕಿಸಿ ಶಾಸಕರ ಆಪ್ತ ಕಾರ್ಯದರ್ಶಿ ಹಾಗೂ ಪುರಸಭೆಯ ಸದಸ್ಯ ಶ್ರೀ ಸಂತೋಷ್ ಶೇಟ್ಟಿ ಯವರೊಂದಿಗೆ ಸ್ಥಳಕ್ಕೆ ಆಗಮಿಸಿ ಸ್ಥಳದಲ್ಲೇ ಸಂಬಂಧಪಟ್ಟ ಅಧಿಕಾರಿಯೊಂದಿಗೆ ಮಾತಾನಾಡಿ ಕೆಲವೆ ಗಂಟೆಗಳಲ್ಲಿ ಸಮಸ್ಯೆಯನ್ನು ಬಗೆಹರಿಸಿಕೊಟ್ಟಿದ್ದಾರೆ, ರಾಜಕಾಲುವೆ ಯಾದ್ದರಿಂದ ಚಪ್ಪಡಿ ನಿರ್ಮಾಣ ಕ್ಕೆ ಕಾನೂನು ತೊಡಕಿದೆ, ಸ್ಥಳಿಯರೇ ಸ್ವಲ್ಪ ಸ್ವಚ್ಚತೆಯನ್ಜು ಕಾಪಾಡಿಕೊಂಡು ಬರುವುದರೊಂದಿಗೆ, ಮುಂದಿನ ದಿನಗಳಲ್ಲಿ ಚರಂಡಿಯ ಅಭಿವ್ರದ್ದಿ ಹಾಗೂ ಸ್ಥಳೀಯರ ಬೇಡಿಕೆಯನ್ನು ಶಾಸಕರ ಗೆ ಮನವಿ ಮಾಡುವ ಭರವಸೆ ನೀಡಿದ್ದಾರೆ.

Kharvionline ಫಲಶ್ರುತಿ ಎಂಬಂತೆ ಉತ್ತಮ ಕಾರ್ಯವೊಂದು ನಡೆದಿದೆ.

ಧನ್ಯವಾದಗಳು

ಸುನೀಲ್ ಖಾರ್ವಿ ಮತ್ತು ಸಂತೋಷ್ ಶೇಟ್ಟಿಯವರಿಗೆ.


www.kharvionline.com

4 thoughts on “Kharvionline ಮನವಿಗೆ ಶೀಘ್ರ ಸ್ಪಂದಿಸಿದ ಸುನೀಲ್ ಖಾರ್ವಿ.

  1. ಸುನೀಲ್ ಖಾರ್ವಿಯವರು ತಮ್ಮ ಪ್ರಭಾವದಿಂದ ಜನೋಪಯೋಗಿ ಕೆಲಸ ಮಾಡಿ ಕೊಟ್ಟಿದ್ದಕ್ಕೆ ಧನ್ಯವಾದಗಳು. ಹೀಗೆ ಮಾಡಿ ತಾವು ಮುಂದೆ ಓರ್ವ ರಾಜಕೀಯ ನಾಯಕನಾಗುವ ಎಲ್ಲಾ ಲಕ್ಷಣಗಳನ್ನು ತೋರಿಸಿದೀರಿ.

  2. ಸುಡುಗಾಡು ತೋಡಿನ ಸಮಸ್ಯೆ ನಿವಾರಣೆಗೆ ದಾಂಗುಡಿಯಿಟ್ಟ ಶ್ರೀ ಸುನಿಲ್ ಖಾರ್ವಿ ಮತ್ತು ಶ್ರೀ ಸಂತೋಷ ಶೆಟ್ಟಿ ಯವರಿಗೆ ಅಭಿನಂದನೆಗಳು ಇದರ ಜತೆಗೆ ಸಮಾಜಮುಖಿ ಕಾರ್ಯ ಕ್ಕೆ ಪ್ರೇರಣೆಯಿತ್ತ ಖಾರ್ವಿ ಆನ್ಲೈನ್ ರವರಿಗೂ ವಂದನೆಗಳು ಸುಡುಗಾಡು ತೋಡಿಗೊಂದು ಶಾಶ್ವತ ಪರಿಹಾರ ದೊರಕಲಿ💪💪✍️👌✌️🙏🙏🙏👏👏👏👍👍

  3. ನಮ್ಮ ಖಾರ್ವಿ ಸಮಾಜದ ಯುವಕ ಸುನಿಲ್ ಖಾರ್ವಿ & ಸಂತೋಷ ಶೆಟ್ಟಿಯವರಿಗೆ ಧನ್ಯವಾದಗಳು…. ನಮ್ಮ ಖಾರ್ವಿ ಸಮಾಜದ ಯುವಕರಿಂದ ಇನ್ನಷ್ಟು (ಯಾವುದೇ ಪಕ್ಷ ಇರಲಿ) ಒಳ್ಳೊಳ್ಳೆ ಕೆಲಸ ಕಾರ್ಯ ಆಗಲೆಂದು ಮಹಾಕಾಳಿ ಅಮ್ಮನಲ್ಲಿ ಪ್ರಾರ್ಥಿಸುತ್ತೇನೆ.

Leave a Reply

Your email address will not be published. Required fields are marked *