ಬಿಜೆಪಿ ವತಿಯಿಂದ ವೃಕ್ಷ ರೋಪಣ ಸಸಿ ನೆಡುವ ಕಾರ್ಯಕ್ರಮ

ಕುಂದಾಪುರ ಮದ್ದುಗುಡ್ಡೆ ಪರಿಸರದ ಕೊಂಕಣಿ ಖಾರ್ವಿ ಪ್ರಗತಿ ಪರ ಸಂಘದ ವಠಾರದಲ್ಲಿ ಬಿಜೆಪಿ ಯುವ ಮೋರ್ಚಾ ಕುಂದಾಪುರ ವತಿಯಿಂದ ವೃಕ್ಷ ರೋಪಣ ಸಸಿ ನೆಡುವ ಕಾರ್ಯಕ್ರಮ ನೆರವೇರಿತು.

ಕಾರ್ಯಕ್ರಮ ಉದ್ದೇಶಿಸಿ ಬಿಜೆಪಿ ಕ್ಷೇತ್ರಾಧ್ಯಕ್ಷ ಶಂಕರ ಅಂಕದಕಟ್ಟೆ ಪರಿಸರ ಸಂರಕ್ಷಣೆಯ ಕುರಿತು ಪ್ರಾಸ್ತಾವಿಕ ಮಾತನಾಡಿ ಈಗಿನ ಪರಿಸ್ಥಿತಿಯಲ್ಲಿ ನಾವು ಮನೆ ಮನೆಯಲ್ಲೂ ಗಿಡವನ್ನು ನೆಡುವುದು ಅವಶ್ಯವಾಗಿದೆ ಪ್ರತಿಯೊಬ್ಬರೂ ಗಿಡವನ್ನು ನೆಡುವುದರಿಂದ ಈ ಸಮಾಜದಲ್ಲಿ ಮುಂದಿನ ದಿನಗಳಲ್ಲಿ ಮುಂದಿನ ಪೀಳಿಗೆಗೆ ಆಮ್ಲಜನಕದ ಕೊರತೆ ನೀಗಿಸಲು ತುಂಬಾ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೊಂಕಣಿ ಖಾರ್ವಿ ಪ್ರಗತಿಪರ ಸಂಘದ ಅಧ್ಯಕ್ಷರಾದ ಶ್ರೀ ನಾರಾಯಣ ಖಾರ್ವಿ, ಗೌರವ ಅಧ್ಯಕ್ಷ ರಾದ ಸಂಜೀವ ಖಾರ್ವಿ, ಶ್ರೀ ಮಹಾಕಾಳಿ ದೇವಸ್ತಾನದ ಉಪಾಧ್ಯಕ್ಷರಾದ ಗಣಪತಿ ಖಾರ್ವಿ, ಹಾಗೂ ನಿರ್ದೇಕರಾದ ದಯಾನಂದ ಖಾರ್ವಿ, ವಿದ್ಯಾರಂಗ ಮಿತ್ರ ಮಂಡಳಿ (ರಿ) ಇದರ ನಿರ್ದೇಶಕರಾದ ಅನಿಲ್ ಖಾರ್ವಿ ಮದ್ದುಗುಡ್ಡೆ, ಕಾರಿಕಟ್ಟೆ ಬೊಬ್ಬರ್ಯ ದೇವಸ್ತಾನದ ಅಧ್ಯಕ್ಷರಾದ ಅಣ್ಣಯ್ಯ ಖಾರ್ವಿ ಯುವ ಮೋರ್ಚಾ ಅಧ್ಯಕ್ಷರಾದ ಅವಿನಾಶ್ ಉಳ್ತೂರ್, ಕಾರ್ಯದರ್ಶಿ ಸುನಿಲ್ ಖಾರ್ವಿ, ಪುರಸಭೆ ಸದಸ್ಯರಾದ ರಾಘವೇಂದ್ರ ಹಾಗೂ ಸ್ಥಳೀಯ ಸಂಸ್ಥೆಯ ನಿರ್ದೇಶಕರು ಸದಸ್ಯರು ಉಪಸ್ಥಿತರಿದ್ದರು ಭವಾನಿ ಶಂಕರ ಖಾರ್ವಿ ಕಾರ್ಯಕ್ರಮ ನಿರೂಪಿಸಿ ವಂದಸಿದರು.

ವರದಿ: ಅನಿಲ್ ಖಾರ್ವಿ ಮದ್ದುಗುಡ್ಡೆ

Leave a Reply

Your email address will not be published. Required fields are marked *