ಸಂತ್ರಸ್ತ ಮೀನುಗಾರರಿಗೆ ಕಾಂಗ್ರೆಸ್ ಅಧ್ಯಕ್ಷರಿಂದ ಅಭಯ

ಸಂತ್ರಸ್ತ ಮೀನುಗಾರರಿಗೆ ಕಾಂಗ್ರೆಸ್ ಅಧ್ಯಕ್ಷರಿಂದ ಅಭಯ ಕಾಸರಕೋಡ ವಾಣಿಜ್ಯ ಬಂದರಿಗೆ ತೀವ್ರ ವಿರೋಧ ಮೃತ ಮೀನುಗಾರನ ಕುಟುಂಬಕ್ಕೆ ಪರಿಹಾರ

ಹೊನ್ನಾವರ : ಕರ್ನಾಟಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಶ್ರೀ ಡಿ ಕೆ ಶಿ ಯವರು ಹೊನ್ನಾವರ ಕಾಸರಕೋಡ ಟೊಂಕ ಪ್ರದೇಶಕ್ಕೆ ಭೇಟಿ ನೀಡಿ ಮೀನುಗಾರರ ಸಮಸ್ಯೆ ಯನ್ನು ಆಲಿಸಿ ವಾಣಿಜ್ಯ ಬಂದರು ನಿರ್ಮಾಣ ರಸ್ತೆ ಕಾಮಗಾರಿ ಸಂಬಂಧ ನಡೆದ ಪೋಲೀಸ್ ದೌರ್ಜನ್ಯವನ್ನು ಖಂಡಿಸಿ ಯಾವುದೇ ಕಾರಣಕ್ಕೂ ಮೀನುಗಾರರಿಗೆ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ಗುಡುಗಿದ್ದಾರೆ.

ಮೀನುಗಾರರ ರಕ್ಷಣೆಗೆ ಸದಾ ಕಾಲ ಕಟಿಬದ್ದರಾಗಿರುತ್ತೇನೆ ಎಂದು ಆಶ್ವಾಸನೆ ನೀಡಿದ್ದು ಇದೇ ಸಂದರ್ಭದಲ್ಲಿ ಸಮುದ್ರದಲ್ಲಿ ಬಿದ್ದು ಮೃತಪಟ್ಟ ಮೀನುಗಾರ ಉದಯ ತಾಂಡೇಲರ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿ ಪರಿಹಾರ ಮೊತ್ತ ವಿತರಿಸಿದರು. ಮೀನುಗಾರರ ಹೋರಾಟಕ್ಕೆ ತಾನು ಸದಾಕಾಲ ಕಟಿಬದ್ದರಾಗಿರುತ್ತೇನೆ ಎಂದು ಆಶ್ವಾಸನೆ ನೀಡಿದರು. ಈ ವೇಳೆ ಭಟ್ಕಳದ ಮಾಜಿ ಶಾಸಕ ಶ್ರೀ ಮಂಕಾಳ ವೈದ್ಯ, ಕಾರವಾರದ ಮಾಜಿ ಶಾಸಕರಾದ ಸತೀಶ್ ಶೈಲ್ ಮತ್ತು ಕುಮಟಾ ಮಾಜಿ ಶಾಸಕಿ ಶಾರದಾ ಶೆಟ್ಟಿಯವರು ಉಪಸ್ಥಿತರಿದ್ದರು.


Report: Renuka Tandel Tonka Kasarkodu

Leave a Reply

Your email address will not be published. Required fields are marked *