ಅಭಿನಂದನೆಗಳು, ಮಕ್ಕಳ ದಿನಾಚರಣೆಯ ಶುಭಾಶಯಗಳೊಂದಿಗೆ

ಮಕ್ಕಳ ದಿನಾಚರಣೆಯ ಅಂಗವಾಗಿ ಖಾರ್ವಿ ಆನ್ಲೈನ್ ಕೊಂಕಣಿ ಖಾರ್ವಿ ಸಮಾಜ ಭಾಂಧವರ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಮುದ್ದುಕಂದ ಸ್ಪರ್ಧೆಗೆ ಕೊಂಕಣಿ ಖಾರ್ವಿ ಸಮಾಜ ಭಾಂಧವರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು,ಸುಮಾರು ನಲವತ್ತಕ್ಕೂ ಹೆಚ್ಚು ಮಕ್ಕಳ ಭಾವಚಿತ್ರಗಳು ಸ್ಪರ್ಧೆಗೆ ಬಂದಿರುವುದು ಖುಷಿ ತಂದಿದೆ.

ನಮ್ಮ ಸಮುದಾಯದ ಪ್ರೇರೇಪಣೆಯಾಗಿ ವಿಧ್ಯುಕ್ತಗೊಂಡ ಈ ಮಕ್ಕಳ ಪೋಟೋ ಸ್ಪರ್ಧೆಯಲ್ಲಿ ತಮ್ಮ ಮಕ್ಕಳ ಸುಂದರವಾದ ಪೋಟೋ ಕಳುಹಿಸಿಕೊಟ್ಟ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ಸುಂದರವಾದ ಮಕ್ಕಳ ಪೋಟೋ ಆಯ್ಕೆ ಮಾಡಲು ತೀರ್ಪುಗಾರರಾಗಿ ಕುಂದಾಪುರದ ಪ್ರಸಿದ್ಧ ಮಕ್ಕಳ ತಜ್ಞ Dr. ಶಶಿಧರ S B ,ಸೌಮ್ಯ ಕ್ಲಿನಿಕ್, ಛಾಯಾಗ್ರಾಹಕರಾದ ನಾಗರಾಜ್ ಬೀಜಾಡಿ ಮತ್ತು ರಾಮ್ ಪ್ರಸನ್ನ ಖಾರ್ವಿಯವರು ಬಹಳ ಪ್ರೀತಿಯಿಂದ ಪಾಲ್ಗೊಂಡಿದ್ದರು. ಅವರೆಲ್ಲರಿಗೂ ಖಾರ್ವಿ ಆನ್ಲೈನ್ ವತಿಯಿಂದ ತುಂಬು ಹೃದಯದ ಧನ್ಯವಾದಗಳನ್ನು ಸಮರ್ಪಿಸುತ್ತೇನೆ.

ಈ ಮಕ್ಕಳ ಪೋಟೋ ಸ್ಪರ್ಧೆಯ ಪ್ರಾಯೋಜಕರಾಗಿ Diyanshi Network India ಪ್ರಥಮ ಬಹುಮಾನವನ್ನು, ದ್ವಿತೀಯ ಬಹುಮಾನವನ್ನು ಶ್ರೇಯಸ್ ಫ್ಯಾಶನ್ ತ್ರಾಸಿ, ತೃತೀಯ ಬಹುಮಾನವನ್ನು S S K Photography ಕುಂದಾಪುರ ಮತ್ತು 4 ಸಮಾಧಾನಕರ ಬಹುಮಾನವನ್ನು ಭಟ್ಕಳದ ಶ್ರೀ ಈಶ್ವರ ಮಂಜುನಾಥ ಖಾರ್ವಿಯವರು ನೀಡಿರುತ್ತಾರೆ. ಇವರೆಲ್ಲರಿಗೂ ಹೃದಯಸ್ಪರ್ಶಿ ಧನ್ಯವಾದಗಳು.

ಯಶಸ್ವಿಯಾಗಿ ಸಂಪನ್ನಗೊಂಡ ಈ ಮಕ್ಕಳ ಪೋಟೋ ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ಚಂದಗಾಣಿಕೆಯ ಮೆರುಗು ತಂದುಕೊಟ್ಟ ಮಕ್ಕಳಿಗೂ, ಪೋಷಕರಿಗೂ ಮಕ್ಕಳ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ಹೃತ್ಪೂರ್ವಕ ಧನ್ಯವಾದಗಳನ್ನು ಸಮರ್ಪಿಸುತ್ತೇನೆ. ನಿಮ್ಮೆಲ್ಲರ ಪ್ರೋತ್ಸಾಹ, ಸಹಕಾರ ಉತ್ಸಾಹ ಮತ್ತು ಬೆಂಬಲದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿದೆ ಎಂದು ಹೇಳಲು ಹರ್ಷಿಸುತ್ತೇನೆ. ಎಲ್ಲರಿಗೂ ಮತ್ತೊಮ್ಮೆ ಪ್ರೀತಿಯ ವಂದನೆಗಳು.

ಸುಧಾಕರ್ ಖಾರ್ವಿ
Editor
www.kharvionline.com

Leave a Reply

Your email address will not be published. Required fields are marked *