ಪಂಜರು ಮೀನು ಕೃಷಿಕರಿಗೆ ಖಾಯಂ ಆಹ್ವಾನ ನೀಡುವಂತೆ ಮನವಿ

ಮೀನುಗಾರರ ಆದಾಯವನ್ನು ದ್ವಿಗುಣಗೊಳಿಸುವ  ಮಹಾತ್ವಾಕಾಂಕ್ಷೆಯ ಪಂಜರ ಮೀನು ಕೃಷಿ ಇಂದು ಜನಪ್ರಿಯವಾಗಿದೆ.ಇದಕ್ಕೆ  ನಿರಂತರ ಬೆಂಬಲ, ಪ್ರೋತ್ಸಾಹ ಮತ್ತು ಮಾರ್ಗದರ್ಶನದ ಅಗತ್ಯವಿದೆ.ಈ ನಿಟ್ಟಿನಲ್ಲಿ ಕುಂದಾಪುರ ತಾಲೂಕು ಪಂಜರ ಮೀನು ಕೃಷಿಕರ ಸಂಘ ಉಡುಪಿ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಕಾಲ ಕಾಲಕ್ಕೆ ನಡೆಯುವ ಜಿಲ್ಲಾ ಮೀನುಗಾರರ ಸಭೆಗೆ ಪಂಜರು ಮೀನು ಕೃಷಿಕರಿಗೆ ಖಾಯಂ ಆಹ್ವಾನ ನೀಡುವಂತೆ ಮನವಿ ಸಲ್ಲಿಸಲಾಯಿತು. ಅಪರ ಜಿಲ್ಲಾಧಿಕಾರಿ ವೀಣಾರವರು ಮನವಿ ಸ್ವೀಕರಿಸಿದರು. ನಿಯೋಗದಲ್ಲಿ ಕುಂದಾಪುರ ತಾಲೂಕು ಪಂಜರ ಮೀನು ಕೃಷಿಕರ ಸಂಘದ ಅಧ್ಯಕ್ಷ ರವಿರಾಜ್ ಖಾರ್ವಿ, ಉಪಾಧ್ಯಕ್ಷರಾದ ಕುಮಾರ್ ಖಾರ್ವಿ, ಗಾಳಿ ಮಾಧವ ಖಾರ್ವಿ, ಕಾರ್ಯದರ್ಶಿ ನಿತ್ಯಾನಂದ ನಾಯ್ಕ್ ಮತ್ತು ಕೋಶಾಧಿಕಾರಿ ಜನಾರ್ಧನ ಖಾರ್ವಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *