ಶಕ್ತಿಸ್ವರೂಪಿಣಿಯ ದಿವ್ಯಸನ್ನಿಧಿಯಲ್ಲಿ ಮಹಾಮೃತ್ಯುಂಜಯ ಹೋಮ

ಶಕ್ತಿಸ್ವರೂಪಿಣಿಯ ದಿವ್ಯಸನ್ನಿಧಿಯಲ್ಲಿ ಮಹಾಮೃತ್ಯುಂಜಯ ಹೋಮ

ಪಂಚಗಂಗಾವಳಿ ನದಿತಟದ ಕುಂದಾಪುರದ ಖಾರ್ವಿಕೇರಿಯಲ್ಲಿ ನೆಲೆಗೊಂಡಿರುವ ಜಾಗೃತ ದೇವತೆ ಶ್ರೀ ಮಹಾಕಾಳಿ ಅಮ್ಮನವರ ದಿವ್ಯಸನ್ನಿಧಿಯಲ್ಲಿ ತಾರೀಕು ಜೂನ್ 23 ರಿಂದ ಜೂನ್ 29 ರ ತನಕ ವೇದಮೂರ್ತಿ ಶ್ರೀ ಚಂದ್ರಶೇಖರ ಸೋಮಾಯಾಜಿ ನೇತೃತ್ವದಲ್ಲಿ 1008 ರ ಸಂಖ್ಯೆಯಲ್ಲಿ ಸಾಮೂಹಿಕ ಮಹಾಮೃತ್ಯುಂಜಯ ಹೋಮ ಹಾಗೂ ತಾರೀಕು 29/6/2022 ರಂದು ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮವು ಭಕ್ತಜನರ ಸಹಾಯದೊಂದಿಗೆ ಶಾಸ್ತ್ರೋಕ್ತವಾಗಿ ನಡೆಯಲಿದೆ. ಈ ಪುಣ್ಯ ಕಾರ್ಯಕ್ರಮಕ್ಕೆ ಸದ್ಬಕ್ತರೆಲ್ಲರೂ ಯಥಾಶಕ್ತಿ ಕಾಣಿಕೆ ಸಮರ್ಪಿಸಿ ಶ್ರೀ ದೇವರ ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿ ಅಮ್ಮನವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಮಹಾಕಾಳಿ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಮೂರು ಮೊಕ್ತೇಸರರು ವಿಜ್ಞಾಪಿಸಿಕೊಂಡಿದ್ದಾರೆ.

ಶ್ರೀ ಮಹಾಕಾಳಿ ಅಮ್ಮನವರ ಹಾಗೂ ಪರಿವಾರ ದೇವರ ಚೈತನ್ಯಾದಿ ಗಣದೋಷ ವಿಮರ್ಶಾರ್ಥ ಪ್ರಾರ್ಥಿಸಿ ಇಟ್ಟಿರುವ ಅಷ್ಟಮಂಗಲ ಪ್ರಶ್ನೆಯಲ್ಲಿ ಸೂಚಿತವಾದಂತೆ ದೋಷ ಪರಿಹಾರಾರ್ಥ ಹಾಗೂ ಶ್ರೀದೇವಿಯ ಭಕ್ತಜನರ ಕಲ್ಯಾಣಾರ್ಥವಾಗಿ ದೇವಿಯ ಸಾನ್ನಿಧ್ಯದಲ್ಲಿ ಈ ಪುಣ್ಯಪ್ರದವಾದ ಕಾರ್ಯಕ್ರಮ ನಡೆಯಲಿದೆ. ಮುಖ್ಯವಾಗಿ ದೋಷವುಳ್ಳ ವೃಷಭ, ಕನ್ಯಾ, ಮಕರ ರಾಶಿಯವರು ಹಾಗೂ ಮೃಗಶಿರ, ಹಸ್ತಾ,ಧನಿಷ್ಕಾ, ಚಿತ್ರಾ, ರೋಹಿಣಿ ಹಾಗೂ ಶ್ರವಣ ನಕ್ಷತ್ರದವರು ಅಗತ್ಯವಾಗಿ ಬಂದು ಪ್ರಸಾದ ಸ್ವೀಕರಿಸಬೇಕು. ಸೇವಾಕರ್ತರ ಭಕ್ತಾದಿಗಳು ಮುಂಚಿತವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ದೇವಸ್ಥಾನ ಆಡಳಿತ ಮಂಡಳಿಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

www.kharvionline.com

Leave a Reply

Your email address will not be published. Required fields are marked *