ಕೊಂಕಣಿ ಖಾರ್ವಿ ವಿದ್ಯಾ ವೇದಿಕೆ ಬೆಂಗಳೂರು 5ನೇ ವರ್ಷದ ಸಂಭ್ರಮದ ಗಣೇಶೋತ್ಸವ

ಕೊಂಕಣಿ ಖಾರ್ವಿ ವಿದ್ಯಾ ವೇದಿಕೆ(ರಿ) ಬೆಂಗಳೂರು ಇವರ ಸಹಯೋಗದಲ್ಲಿ 5ನೇ ವರ್ಷದ ಗಣೇಶೋತ್ಸವವು ಅದ್ದೂರಿಯಾಗಿದೆ ಎಂದು ತಿಳಿಸಲು ಹರ್ಷಿಸುತ್ತೇವೆ. ದೂರದ ಬೆಂಗಳೂರಿನಲ್ಲಿ ಸಮುದಾಯದವರನ್ನು ಒಗ್ಗೂಡಿಸುವುದೇ ಒಂದು ಕಷ್ಟಕರವಾದ ಕೆಲಸವಾಗಿರುತ್ತದೆ. ಅಂಥದ್ರಲ್ಲಿ ನಮ್ಮ ಸಂಘವು ಸಮುದಾಯದ ಹೆಚ್ಚಿನ ಸದಸ್ಯರನ್ನು ಆಮಂತ್ರಿಸಿ ಯಶಸ್ವಿಗೊಳಿಸಿರುವುದು ನಿಜವಾಗಿಯೂ ಸಂತಸಕರ ವಿಷಯವಾಗಿದೆ.

ವಿಶೇಷವಾಗಿ ಮಹಿಳಾ ಸಂಘ ಬೆಂಗಳೂರು ಇವರ ಪಾತ್ರವು ಅವಿಸ್ಮರಣೀಯವಾಗಿದೆ. ಬಂದಂತಹ ಎಲ್ಲಾ ಮುತ್ತೈದೆಯರನ್ನು ಅರಶಿನ ಕುಂಕುಮ ನೀಡಿ ಗೌರವಿಸಿದರು. ಸುಮಾರು 150 ಕ್ಕೂ ಹೆಚ್ಚಿನ ಸಮಾಜ ಬಾಂಧವರು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಗಣೇಶನ ಕೃಪೆಗೆ ಪಾತ್ರರಾದರು. ನಮ್ಮ ಕರೆಗೆ ಓಗೊಟ್ಟು ತಮ್ಮ ಅಮೂಲ್ಯವಾದ ಸಮಯವನ್ನು ನೀಡಿ ವಿಸರ್ಜನ ತನಕ ನಮ್ಮೊಂದಿಗೆ ಇದ್ದು ಈ ಒಂದು ಕಾರ್ಯಕ್ರಮ ಯಶಸ್ವಿಗೊಳಿಸಲು ಕಾರಣೀ ಭೂತರಾದ ಸಮುದಾಯದ ಎಲ್ಲಾ ಬಂಧು ಬಾಂಧವರಿಗೆ ಮಾತೆಯರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇವೆ.

ತಮ್ಮ ಸಹಕಾರ ಹೀಗೆಯೇ ಮುಂದುವರಿಯಲಿ ಎಂದು ವಿನಯ ಪೂರ್ವಕವಾಗಿ ಪ್ರಾರ್ಥಿಸುತ್ತೇವೆ.

ಧನ್ಯವಾದಗಳೊಂದಿಗೆ
ಕೊಂಕಣಿ ಖಾರ್ವಿ ವೇದಿಕೆ (ರಿ) ಬೆಂಗಳೂರು

ವರದಿ: ನಮೋ ರಾಘವೇಂದ್ರ ಖಾರ್ವಿ ಬೆಂಗಳೂರು

2 thoughts on “ಕೊಂಕಣಿ ಖಾರ್ವಿ ವಿದ್ಯಾ ವೇದಿಕೆ ಬೆಂಗಳೂರು 5ನೇ ವರ್ಷದ ಸಂಭ್ರಮದ ಗಣೇಶೋತ್ಸವ

Leave a Reply

Your email address will not be published. Required fields are marked *