ಸುರೇಶ ಪಂಡಿತ್ ಗಂಗೊಳ್ಳಿ80 ರ ದಶಕದಲ್ಲಿ ಗಮನ ಸೆಳೆದ ವಿಭಿನ್ನ ಶೈಲಿಯ ಚಿತ್ರಕಾರ

ಚಿತ್ರಗಾರಿಕೆಯನ್ನು ಮುಂದುವರ್ಸಿಕೊಂಡೆ ಹೋಗಿದ್ದೆ ಆದರೆ ಇವರು ಇಂದು ರಾಷ್ಟ್ರ ಮಟ್ಟದಲ್ಲಿ very fantastic artist ಎಂದು ಗುರುತಿಸಿ ಕೊಳ್ಳುತ್ತಿದ್ದರು.

ಸ್ವಯಂ ಪ್ರಯತ್ನದಿಂದ ಚಿತ್ರ ಬಿದಿಸುತ್ತಲೇ ತನ್ನದೇ ಶೈಲಿಯಿಂದ ವಿಭಿನ್ನವಾಗಿ ಗುರುತಿಸಿಕೊಂಡ ಕಲೆಗಾರ. ಯಾವುದೇ ಚಿತ್ರಕಲೆ ಶಾಲೆಗೆ ಹೋಗದೆ ಕೇವಲ observations ಮತ್ತು interest ನಿಂದ ಗೆರೆಗಳ ಜೊತೆ ಸರಸ ಸಲ್ಲಾಪ ಮಾಡಿ ತನ್ನದೇ ಒಂದು style ನಿಂದ ಚಿತ್ರ ಬಿಡಿಸಿ ಎಲ್ಲರ ಮೆಚ್ಚುಗೆ ಪಡೆದ artist mr. Suresh Pandith Gangolli.

ಗಂಗೊಳ್ಳಿ ಪ್ರತಿಭೆಗಳ ತವರೂರು. ಪ್ರಾಕೃತಿಕ ಸೌಂದರ್ಯದ ಈ ಪುಟ್ಟ ಊರಿನ ಬಹುಮುಖ ಪ್ರತಿಭೆ ಸುರೇಶ ಪಂಡಿತ್. ಎದುರುಗಡೆ ಕೂತ ವ್ಯಕ್ತಿಯನ್ನು ಒಮ್ಮೆ ನೋಡಿದರೆ ಸಾಕು. ಕೆಲವೇ ಕ್ಷಣದಲ್ಲಿ ಅವರ ಚಿತ್ರ ಇವರ ಮಾಂತ್ರಿಕ ಶಕ್ತಿಯ ಕೈಗಳಿಂದ ಪೇಪರ್ನಲ್ಲಿ ಮೂಡಿ ಬರುತಿತ್ತು. ಕಾರ್ಟೂನ್ಸ್ ಕೂಡ ಗಿಚುತ್ತಿತ್ತು ಇವರ ಕೈಗಳು. ಅಂದು asian games ಸಂದರ್ಭದಲ್ಲಿ ಇವರು ಬರೆದ ಹಲವು ಕಾರ್ಟೂನ್ಸ್ ಈಗಲೂ ನೆನಪಿದೆ. It was Wonderful Arts

ತರಂಗ ಸುಧಾ ಮುಂತಾದ ಪತ್ರಿಕೆಯಲ್ಲಿ ಪ್ರಕಟವಾಗಿತ್ತು ಇವರ ಕಾರ್ಟೂನ್ಸ್ಗಳು ಅಂದು. ಆದರೆ ಇವರದು ವಿಶೇಷ ಆಸಕ್ತಿ paintings ನಲ್ಲಿ. ಅದ್ಭುತ paintings ಇವರದು. ಗಂಗೊಳ್ಳಿ kalaikar ಮಠ ದಲ್ಲಿ ಇವರ ಕೊಲ್ಲೂರು ಮೂಕಾಂಬಿಕಾ ದೇವಿಯ oil painting ಎಲ್ಲರ ಹುಬ್ಬೆರಿಸುತ್ತೆ. So fantastic painting👌👌👌💐 ಕೈಯಲ್ಲಿ ಕುಂಚ ಹಿಡಿದರೆ ಸಾಕು ಅಲ್ಲೊಂದು ಅದ್ಭುತ ಸ್ರಷ್ಟಿ ಆಗುತಿತ್ತು.

ಚುನಾವಣೆ ಸಮಯದಲ್ಲಿ ಅಂಗಡಿ ಗೋಡೆ ಮೇಲೆ,ರಸ್ತೆ ಪಾಗರದ ಮೇಲೆ,ರಸ್ತೆಗಳ ಮೇಲೆ ಪಕ್ಷದ ಚಿಂಹ್ನೆ, ಅಭ್ಯರ್ಥಿ ಹೆಸರು ಇವರ ಕೈಗಳಲ್ಲಿ ಮೂಡಿ ಬರುವ style ಆಕರ್ಷಕವಾಗಿರುತಿತ್ತು. ನ್ಯೂ ಇಯರ್ ಸಮಯದಲ್ಲೂ ಕೂಡ ಇವರ ಕುಂಚದಲ್ಲಿ ಗೋಡೆ ರಸ್ತೆಗಳಲ್ಲಿ Happy New Year ಬರಹ ಎಲ್ಲರ ಗಮನ ಸೆಳೆಯುತ್ತಿತ್ತು. ಗಂಗೊಳ್ಳಿಯಲ್ಲಿದ್ದ ಇವರ ದೊಡ್ಡಪ್ಪ ಬಸವ ಪಂಡಿತರ ಮನೆ ಮತ್ತು ಅಂಗಡಿ ಮಾಳಿಗೆ ಗೋಡೆಗಳಲ್ಲಿ ಇವರು ಮಸಿಯಲ್ಲಿ ಬಿಡಿಸಿದ ಚಿತ್ರಗಳು ಇನ್ನೂ ಕಣ್ಣ ಮುಂದೆ ಇದೆ.

ಸುರೇಶ ಪಂಡಿತ್ ಇನ್ನೂ ವಿಶೇಷವಾಗಿ ಗುರುತಿಸಿ ಕೊಂಡಿದ್ದು ತನ್ನ ವಿಶಿಷ್ಟ ಶೈಲಿಯ “ನಗ್ನ ಚಿತ್ರ”ಗಳಿಂದ.ಇವರ ಮಿಂಚಿನ ಕೈಗಳಲ್ಲಿ ಮೂಡಿ ಬಂದ ನಗ್ನ ಶಿಲಾಬಾಲಿಕೆ ಯರು ಲೆಕ್ಕವಿಲ್ಲ. ಇವರು ಬಿಡಿಸಿದ ನಗ್ನ ಚಿತ್ರಗಳು ಬೇಲೂರು ಹಳೇಬೀಡು ನಗ್ನಚಿತ್ರಗಳನ್ನು ನೆನಪಿಸುತ್ತಿತ್ತು. Really it was extraordinary

Paintings, cartoons, Nude Arts ಮಾತ್ರವಲ್ಲ ಇವರು ತುಂಬಾ ಚೆನ್ನಾಗಿ ತಬಲಾ ವಾದಕರು.ಇದು ಕೂಡ ಕೇವಲ ನೋಡಿನೆ ಕಲಿತವರು.ಆಗಾಗ ಹನಿಗವನ ಬರೆಯುತ್ತಿದ್ದ ಇವರು joke cut ಮಾಡುದರಲ್ಲಿ sooperb. ನಾಟಕದಲ್ಲಿ ಇವರದು ಯಾವಾಗಲೂ heroine ಪಾತ್ರ.ಉತ್ತಮ ಕ್ರಿಕೆಟರ್ ಕೂಡ ಹೌದು. ಕ್ಯಾರಂ ನಲ್ಲಿ ಇವರದು extraordinary ಆಟ. ಹೀಗೆ ಸುರೇಶ ಪಂಡಿತ್ ಗಂಗೊಳ್ಳಿ ಬಹುಮುಖ ಪ್ರತಿಭಾವಂತರಾಗಿ ಗುರುತಿಸಿ ಕೊಂಡ ಪ್ರತಿಭೆ.

ಇನ್ನೂ ಕಾಲ ಮಿಂಚಿಲ್ಲ ಇವರು ಮನಸ್ಸು ಮಾಡಿದರೆ ಚಿತ್ರಗಾರಿಕೆಯನ್ನು ಈಗಲೂ ಮುಂದುವರಿಸಲು

ಸಾಧ್ಯವಿದೆ.ಆದರೆ ಇವರು ಮನಸ್ಸು ಮಾಡಬೇಕು ಅಷ್ಟೇ ಅಂದ ಹಾಗೆ ಇವರು ಗಂಗೊಳ್ಳಿ ಶ್ರೀ.ಸಾನಪ್ಪ ಪಂಡಿತ್ ಮತ್ತು ಶ್ರೀಮತಿ ಮೋಹಿನಿ ಪಂಡಿತ್ ರವರ ಪುತ್ರ.ಪ್ರಸ್ತುತ ಮುಂಬೈ ಯಲ್ಲಿ ವಾಸ ಮಾಡಿ ಕೊಂಡಿದ್ದಾರೆ

ರವಿ ಕುಮಾರ್ ಗಂಗೊಳ್ಳಿ

Leave a Reply

Your email address will not be published. Required fields are marked *