ಕುಂದಾಪುರ:. ಮುಂಗಾರು ಮಳೆ ಪ್ರಾರಂಭವಾಗುವ ಮುನ್ನ ಪುರಸಭೆಯವರು ರಸ್ತೆಯ ಇಕ್ಕೆಲಗಳಲ್ಲಿನ ತೋಡಿನ ಊಳನ್ನು ಎತ್ತಿ ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಲು ಮನವಿಯನ್ನು ಮಾಡಲಾಗಿ ಇಂದು ಖಾರ್ವಿ ಕೇರಿ ರಸ್ತೆಯ ತೋಡಿನ ಊಳೆತ್ತುವ ಕಾರ್ಯ ಪ್ರಾರಂಬಿಸಿದರು.
ಹಾಗೆಯೇ ಖಾರ್ವಿಕೇರಿಯ ರಸ್ತೆಯಲ್ಲಿ ಒಂದೆರಡು ಮರಗಳು ಬುಡಮೇಲಾಗಿ ಇರುವ ಕಾರಣ ಜೋರು ಗಾಳಿಗೆ ಮನೆ ಮೇಲೆ ಬೀಳುವ ಸಂಭವ ಇರುವುದರಿಂದ ಅತ್ತಿ ಮರವನ್ನು ತೆರವುಗೊಳಿಸುವ ಅವಶ್ಯಕತೆ ಇದೆ. ಹಾಗೆಯೇ ಖಾರ್ವಿಕೇರಿಯ ಒಳಭಾಗದಲ್ಲಿರುವ ಸಾರ್ವಜನಿಕ ತೋಡುಗಳು ಊಳು ತುಂಬಿದ್ದು ಅದರಲ್ಲಿನ ಊಳು ತೆಗೆದು ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಿ ಅಕ್ಕಪಕ್ಕದ ಮನೆಯು ಹಾನಿಯಾಗುವುದನ್ನು ತಡೆಯಬೇಕಾಗಿದೆ.
ವಾರ್ಡಿನ ಜನರ ಮನವಿಗೆ ಸ್ಪಂದಿಸಿದ ಪುರಸಭೆ ಕೌನ್ಸಿಲರ್ ಪ್ರಭಾವತಿಯವರಿಗೆ