ನಿಮ್ಮ ಒಂದು ಅಭಿನಂದನೆ….

ಕೊಂಕಣಿ ಖಾರ್ವಿ ಸಮಾಜ ಇಂದು ಎಲ್ಲಾ ಕ್ಷೇತ್ರದಲ್ಲೂ ತನ್ನ ಕ್ಷಿತಿಜವನ್ನು ವಿಸ್ತಾರವಾಗಿ ಹರಡಿಕೊಂಡಿದೆ. ಸಮಾಜದ ಪ್ರತಿಭೆಗಳು ಎಲ್ಲಾ ಕ್ಷೇತ್ರಗಳಲ್ಲೂ ಮಿಂಚುತ್ತಿದ್ದಾರೆ. ಅತೀವ ಪರಿಶ್ರಮ ಮತ್ತು ಅಗಾಧವಾದ ಸಾಧನೆಯೊಂದಿಗೆ ಮುನ್ನೆಡೆಯುತ್ತಿರುವ ನಮ್ಮ ಸಮಾಜದ ಪ್ರತಿಭೆಗಳು ಸಮಾಜಕ್ಕೆ ಕೀರ್ತಿ ತರುತ್ತಿದ್ದಾರೆ. ನಮ್ಮಲ್ಲಿ ಪ್ರತಿಭೆಗಳಿಗೆ ಬರವಿಲ್ಲ. ಪ್ರೋತ್ಸಾಹ ,ಬೆಂಬಲದ ಕೊರತೆ ಎದ್ದು ಕಾಣುತ್ತದೆ. ನಮ್ಮ ಸಮಾಜದ ಪ್ರತಿಭೆಗಳಿಗೆ ಸಮಾಜದಿಂದ ಸೂಕ್ತ ಸಹಕಾರ ಬೆಂಬಲ,ಪ್ರೋತ್ಸಾಹ ಕಡಿಮೆಯಾಗುತ್ತಿದೆ ಎಂಬ ಕೊರಗು ಕಾಡುತ್ತಿದೆ. ಇಂದು ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಸಮಾಜದ ಮಂದಿ ಹಲವಾರು ವಿಷಯದಲ್ಲಿ ಸಕ್ರಿಯರಾಗಿದ್ದಾರೆ. ಪ್ರತಿಯೊಂದು ವಿಷಯಕ್ಕೂ ಸ್ಪಂದಿಸುತ್ತಿರುವುದನ್ನು ಕಾಣಬಹುದು. ಆದರೆ ಸಮಾಜ ಕಟ್ಟುವ, ಬೆಳೆಸುವ, ಸಮಾಜದ ಪ್ರತಿಭೆಗಳನ್ನು ಪ್ರೋತ್ಸಾಹಿಸಿ,ಬೆಂಬಲಿಸುವ ಕಾರ್ಯ ಆಗುತ್ತಿಲ್ಲ.

ನಮ್ಮ ಪ್ರತಿಭೆಗಳು ಸಾಧನೆಗೈದ ಸಂದರ್ಭದಲ್ಲಿ ಒಂದು ಅಭಿನಂದನೆ ಸಲ್ಲಿಸುವ ಕೆಲಸ ಕೂಡಾ ಆಗುತ್ತಿಲ್ಲ ಎಂಬ ವಿಷಾದಭಾವವಿದೆ.ನಮ್ಮ ಸಮಾಜದ ಪ್ರತಿಭೆಗಳನ್ನು ಪ್ರೋತ್ಸಾಹಿಸಿ,ಬೆಂಬಲಿಸಿದರೆ ಅವರು ಪಟ್ಟ ಪರಿಶ್ರಮ ಸಾರ್ಥಕತೆ ಕಾಣುತ್ತದೆ. ಉಳಿದವರಿಗೂ ಇದರಿಂದ ಉತ್ತೇಜನವೂ ದೊರಕುತ್ತದೆ. ಪ್ರಸ್ತುತ ಆ ಕೆಲಸ ಆಗುತ್ತಿಲ್ಲವೆಂದು ಬೇಸರವಾಗುತ್ತದೆ. ದಯವಿಟ್ಟು ಸಮಾಜ ಭಾಂಧವರಲ್ಲಿ ವಿಜ್ಞಾಪಿಸಿಕೊಳ್ಳುವುದೇನೆಂದರೆ ನಮ್ಮ ಸಮಾಜದ ಪ್ರತಿಭೆಗಳಿಗೆ ಪ್ರೋತ್ಸಾಹ ಬೆಂಬಲದ ನಿಮ್ಮ ಮಾತುಗಳು ಹೆಚ್ಚಾಗಿ ಕೇಳಿ ಬರಲಿ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿ ವಿವಿಧ ಗ್ರೂಪ್ ಗಳನ್ನು ರಚಿಸಿಕೊಂಡಿರುವವರು ಸಾಧನೆ ಮತ್ತು ಅಭಿನಂದನೆಗಳನ್ನು ಬಿತ್ತರಿಸುವ ಕೆಲಸ ಮಾಡಿದರೆ ದೊಡ್ಡ ಉಪಕಾರವಾಗುತ್ತದೆ.ಇದು ಸಮಾಜದ ಪ್ರತಿಭಾವಂತರಿಗೆ ಅಭೂತಪೂರ್ವ ಚೈತನ್ಯ ನೀಡಿ ಮತ್ತಷ್ಟೂ ಸಾಧನೆಗೆ ಪ್ರೇರಣೆ ನೀಡಿದಂತಾಗುತ್ತದೆ. ದಯವಿಟ್ಟು ಸಮಾಜ ಭಾಂಧವರು ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿ ಸಮಾಜ ಕಟ್ಟುವಲ್ಲಿ ಸಹಕರಿಸಬೇಕೆಂದು ಕಳಕಳಿಯಿಂದ ನಿವೇದಿಸಿಕೊಳ್ಳುತ್ತೇನೆ.

ವಂದನೆಗಳೊಂದಿಗೆ,

ಸುಧಾಕರ್ ಖಾರ್ವಿ
Team kharvionline.com

One thought on “ನಿಮ್ಮ ಒಂದು ಅಭಿನಂದನೆ….

  1. ಸಮಾಜಕ್ಕೆ ಕೀರ್ತಿ ತಂದುಕೊಟ್ಟ ಡಾಕ್ಟರ್ ಸುರೇಶ್ ಖಾರ್ವಿ ಯವರಿಗೆ ನಲ್ಮೆಯ ಅಭಿನಂದನೆಗಳು. ನಿಮ್ಮ ಬದುಕು ಹೃದಯಸ್ಪರ್ಶಿ ಯಾಗಿ ಸಂಪನ್ನಗೊಳ್ಳಲ್ಲಿ ಎಂದು ಶುಭಾಶಯಗಳನ್ನು ಸಲ್ಲಿಸುತ್ತೇನೆ.💐💐💐💐💐👋👋👋👋👍👌🙏🙏🙏🙏🙏

Leave a Reply

Your email address will not be published. Required fields are marked *