ಕುಂದಾಪುರ: ಮುಂಗಾರು ಮಳೆ ಆರಂಭದ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಯಲ್ಲಿ ಜೂನ್ 1 ರಿಂದ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ ವಾಗಲಿದ್ದು 10 ಎಚ್ ಪಿ ಔಟ್ ಬೋರ್ಡ್ ಎಂಜಿನ್ ಅಳವಡಿಸಿದ ನಾಡದೋಣಿ ಮೀನುಗಾರಿಕೆಯಷ್ಟೇ ನಡೆಯಲಿದೆ.
ಮುಂಗಾರು ಮಳೆ ಆರಂಭಕ್ಕೂ ಮೊದಲೇ ಶೇಕಡ 80ರಷ್ಟು ಬೋಟುಗಳು ಕೋವಿಡ್ ಮಾಹಾಮಾರಿ ಯಿಂದ ಕಾರ್ಮಿಕರ ಕೊರತೆ ತಪ್ಪೆ ಚಂಡಮಾರುತ ಡೀಸೆಲ್ ದರ ಶೇಕಡ 50ರಷ್ಟು ಹೆಚ್ಚಳದ ಹಿನ್ನೆಲೆಯಲ್ಲಿ ಲಂಗರು ಹಾಕಿದೆ.
ಲಾಕ್ ಡೌನ್ ಹಿನ್ನೆಲೆಯಲ್ಲಿ ಮೀನುಗಾರರು ಸಂಪೂರ್ಣ ತೊಂದರೆ ಒಳಗಾಗಿದ್ದು ಸರಕಾರವು ಸೂಕ್ತ ಪರಿಹಾರವನ್ನು ನೀಡಿ ಸಹಕರಿಸಬೇಕಾಗಿ ವಿನಂತಿ.