ನರಸಿಂಹ ಅಣ್ಣನ ನೆನಪು

ದಿ. ನರಸಿಂಹ ಖಾರ್ವಿ ಕುಂದಾಪುರ

ಕುಂದಾಪುರ ಕೊಂಕಣಿ ಖಾರ್ವಿ ಸಮಾಜ ಕಂಡ ಅತ್ಯಂತ ಯಶಸ್ವಿ ನಾಯಕ ಕೊಡುಗೈದಾನಿ ಹಾಗೂ ಸರಳಜೀವಿ ಆದ ದಿll ನರಸಿಂಹ ಖಾರ್ವಿ ಯವರು ಕುಂದಾಪುರ ಮಹಾಕಾಳಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಶಿಥಿಲಾವಸ್ಥೆಯಲ್ಲಿದ್ದ ಮಾರಿಗುಡಿಯನ್ನು ಸಮರ್ಥ ನಾಯಕತ್ವ ಗುಣದಿಂದ ಸಮಾಜದ ಎಲ್ಲರನ್ನು ಒಟ್ಟುಗೂಡಿಸಿಕೊಂಡು ಒಂದು ಭವ್ಯ ದೇವಸ್ಥಾನ ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದರ ಫಲವಾಗಿ ಇಂದು ಸಮಾಜದ ಜನಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ತಮ್ಮ ಈ ಮಹಾನ್ ಕಾರ್ಯವನ್ನು ನೆನಪಿಸುತ್ತಾ ಖಾರ್ವಿ ಆನ್ಲೈನ್ ಸಮಾಜ ಬಾಂಧವರ ಪರವಾಗಿ ಹೃದಯಪೂರ್ವಕ ಪ್ರಣಾಮವನ್ನು ಸಮರ್ಪಿಸುತ್ತಿದೆ.

3 thoughts on “ನರಸಿಂಹ ಅಣ್ಣನ ನೆನಪು

  1. True,

    Credit goes to him for transforming our Community religiously….

    He led from front to reconstruct our Gramdevata temple….

    I still remember his visit to M’bai for donation for temple.

    My mother, Yashoda Thimma Naik,offered 10 K for d same

  2. ನಮ್ಮ ಸಮುದಾಯದ ಈ ಮಾಹಾನ್  ಚೇತನಕ್ಕೆ ನನ್ನ ಗೌರವ ಪೂರ್ಣ ನಮನಗಳು  

  3. ಅಂದಿನ ದಿನಗಳಲ್ಲಿ ಇವರ ಕಾರ್ಯಕ್ರಮಗಳು ಧಾರ್ಮಿಕ ಕ್ಷೇತ್ರಕ್ಕೆ ಸೀಮಿತವಾಗದೆ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿ ಕೊಂಡವರು. ಕೊಡುಗೈ ದಾನಿ ಎಂದೇ ಖ್ಯಾತಿ ಪಡೆದವರು.

    ಇವರಲ್ಲಿರುವ ವಿಶೇಷ ವ್ಯಕ್ತಿತ್ವದಿಂದಾಗಿ ಖಾರ್ವಿ ಸಮಾಜದಲ್ಲಿ ಇವರ ಹೆಸರು ಶಾಶ್ವತವಾಗಿ ಉಳಿದಿದೆ. ಕುಂದಾಪುರದ ಎಲ್ಲಾ ಖಾರ್ವಿ ಸಮಾಜ ಭಾಂದವರನ್ನು ಒಂದುಗೂಡಿಸಿ ನಮ್ಮ ಗ್ರಾಮ ದೇವತೆ ಶ್ರೀ ಮಹಾಕಾಳಿ ಅಮ್ಮನವರ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸುವಲ್ಲಿ ಶ್ರೀಯುತರ ಪಾತ್ರ ಪ್ರಮುಖವಾಗಿತ್ತು. ಕುಂದಾಪುರ ಮಹಾಕಾಳಿ ದೇವಸ್ಥಾನ ಇಂದಿನ ಭವ್ಯ ಧಾರ್ಮಿಕ ಕ್ಷೇತ್ರವನ್ನಾಗಿಸಲು ಶ್ರೀಯುತರ ಅಂದಿನ ಶ್ರಮ ನಾವು ನೆನಪಿಸಿಕೊಳ್ಳಲೆಬೇಕು.

    ಅಂದಿನ ದಿನಗಳಲ್ಲಿ ನರಸಿಂಹ ಅಣ್ಣ ಎಂದರೆ ಜನರಿಗೆ ಸ್ಫೂರ್ತಿ, ದೈರ್ಯ, ಚೈತನ್ಯ, ಶಕ್ತಿ ಮತ್ತು ಗೌರವ.

    ಕುಂದಾಪುರ ಖಾರ್ವಿ ಸಮಾಜಕ್ಕೆ ಉತ್ತಮ ಮಾರ್ಗದರ್ಶನ ನೀಡಿದ ದಿ. ನರಸಿಂಹ ಖಾರ್ವಿ ಇವರಿಗೆ ಗೌರವ ಪೂರ್ವಕ ನಮನಗಳು.

Leave a Reply

Your email address will not be published. Required fields are marked *